Sunday, 27 November 2011

ಕನ್ನಡ ರಾಜ್ಯೋತ್ಸವ 2011


ಪ್ರತಿಸಲದಂತೆ ಈ ಬಾರಿಯೂ ಬೇಸ್ನಲ್ಲಿ ಕನ್ನಡ ರಾಜ್ಯೋತ್ಸವನ್ನು ಹಮ್ಮಿಕೊಳ್ಳಲಾಗಿತ್ತು. ನವೆಂಬರ್ 1 ರ ಮಂಗಳವಾರ ಬೆಳಿಗ್ಗೆ 8:30ಕ್ಕೆ ಧ್ವಜಾರೋಹಣ ಕಾರ್ಯಕ್ರಮ ಆಯೋಜಿತವಾಗಿತ್ತು. ಹಿರಿಯ ಅಧ್ಯಾಪಕರಾದ ಶ್ರೀ ವೇಲುರವರಿಂದ ಧ್ವಜಾರೋಹಣ ಕಾರ್ಯ ಪೂರ್ಣಗೊಂಡಿತು. ನಂತರ ನಾಡಗೀತೆಯನ್ನು ಒಟ್ಟಾಗಿ ಹೇಳಲಾಯಿತು. ನಂತರದಲ್ಲಿ ಉಪಸ್ಥಿತರಿದ್ದ ಹಿರಿಯ ಉಪನ್ಯಾಸಕರು ಕನ್ನಡದ ನಡೆ ನುಡಿ ಅಳಿವು ಉಳಿವಿನ ಕುರಿತಾಗಿ ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿಕೊಟ್ಟರು. ನಂತರ ಎಲ್ಲರಿಗೂ ಸಿಹಿ ನೀಡಿ ಶುಭಾಷಯ ಕೋರಲಾಯಿತು. ಕಾಯಕ್ರಮದಲ್ಲಿ ಬೇಸ್ ಪರಿವಾರದ ಸುಮಾರು 35 ಮಂದಿ ಹಾಜರಾಗಿದ್ದುದು ಸಂತಸ ತಂದಿತು. 
    ಇನ್ನುಳಿದ ಸದಸ್ಯರು ಹಾಜರಾಗದಿದ್ದುದು ನೋವಿನ ಸಂಗತಿ. ಯಾವುದೇ ರಾಜ್ಯ ಅಥವಾ ದೇಶೋತ್ಸವಗಳಿಗೆ ನಾವೆಲ್ಲರೂ ಮುಕ್ತ ಮನಸ್ಸಿನಿಂದ ಹಾಜರಾಗಬೇಕು. ಇದಕ್ಕೆ ಯಾವುದೇ ಆಹ್ವಾನದ ನಿರೀಕ್ಷೆ ಇಟ್ಟುಕೊಳ್ಳಬಾರದು. ಮುಕ್ತ ಮನಸ್ಕರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಸಾಲಿರಾಮಚಂದ್ರರಾಯರು ಹೇಳುತ್ತಿದ್ದ ಮತ್ತು ಅವರು ಅಳವಡಿಸಿಕೊಂಡಿದ್ದ, ಅನುಸರಿಸುತ್ತಿದ್ದ ಮಾತುಗಳು ನಮಗೆ ದಾರದೀಪವಾಗಬೇಕು. ಆಗ ಮಾತ್ರ ನಮ್ಮ ನೆಲ, ಭಾಷೆ, ದೇಶ ನಿಜ ಬೆಳಕ ಕಂಡೀತು.
ಕನ್ನಡದ ನುಡಿಯೆ ಗಾಯತ್ರಿಯದ್ಭುತ ಮಂತ್ರ

ಮಿನ್ನಾವು ದೈ ಪೆರತು ಕನ್ನಡದ ಸೇಯಿಂದಧಿಕಮೀ ಜಗರೊಳೆನಗೆ?
ಕನ್ನಡದ ಶಬ್ದಮೆನಗೋಂಕಾರ
ಕನ್ನಡದ ನೆಲದ ನೀವರ್ೊನಲೆ ನಗೆ ದೇವನದಿ
ಕನ್ನಡದ ಪುಲ್ಲೆನಗೆ ಪಾವನ ತುಲಸಿ
ಕನ್ನಡದ ಕಲ್ಲೆನೆಗೆ ಸಾಲಿಗ್ರಾಮ ಶಿಲೆ.


ಏಳ್ಗೆ ಕಣರ್ಾಟಕಂ - ಬಾಳ್ಗೆ ಕಣರ್ಾಟಕಂ - ಆಳ್ಗೆ ಕಣರ್ಾಟಕಂ
ಸಿರಿಗನ್ನಡಂ ಗೆಲ್ಗೆ - ಸಿರಿಗನ್ನಡಂ ಬಾಳ್ಗೆ - ಸಿರಿಗನ್ನಡಂ ಗಲ್ಲಿ-ಗಲ್ಲಿಗೆ
* * *

No comments:

Post a Comment